ಕಾಸರಗೋಡು, ಅ. 14 (DaijiworldNews/PY): ತೋಟದ ಕೆರೆಗೆ ಬಿದ್ದು ನಿವೃತ್ತ ಶಿಕ್ಷಕರೋರ್ವರು ಮೃತಪಟ್ಟ ಘಟನೆ ಪೆರ್ಲ ಬಳಿ ಅ.14ರ ಬುಧವಾರ ನಡೆದಿದೆ.
ಪೆರ್ಲ ಪೆಲ್ತಾಜೆಯ ಕೃಷ್ಣ ನಾಯ್ಕ್ (74) ಮೃತಪಟ್ಟವರು.
ಬೆಳಿಗ್ಗೆ ಮನೆಯಿಂದ ತೋಟಕ್ಕೆ ತೆರಳಿದ್ದ ಕೃಷ್ಣ ನಾಯ್ಕ್ ಅವರು ನಾಪೆತ್ತೆಯಾಗಿದ್ದರು. ಮನೆಯವರು ಶೋಧ ನಡೆಸಿದಾಗ ತೋಟದ ಕೆರೆಯಲ್ಲಿ ಪತ್ತೆಯಾಗಿದ್ದು, ಕೆರೆಯಿಂದ ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ಕೊಂಡಿಯ್ಯಲಾಯಿತ್ತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಕೃಷ್ಣ ನಾಯ್ಕ್ ಅವರು, ಏತಡ್ಕ, ಸೂರಂಬೈಲ್, ಕುಂಬಳೆ , ಪಿಲಾಂಕಟ್ಟೆ ಮೊದಲಾದ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಪಿಲಾಂ ಕಟ್ಟೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.