ಮಂಗಳೂರು, ಅ. 13 (DaijiworldNews/SM): ಕರಾವಳಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಭಾವನೆಗಳು ಅಡಕಗೊಂಡಿರುವ ಹುಲಿವೇಷ ಕುಣಿತಕ್ಕೆ ಅನುಮತಿ ಸಿಕ್ಕಿದ್ದು, ದೇವಸ್ಥಾನದ ಆವರಣದೊಳಗೆ ಹರಕೆ ಹುಲಿವೇಷ ಕುಣಿತ ಮಾಡಬಹುದೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.
ದೈಜಿವರ್ಲ್ಡ್ ನಡೆಸಿದ್ದ ಅಭಿಯಾನದ ಇಂಪ್ಯಾಕ್ಟ್:
ಕೊರೋನಾ ಕಾರಣದಿಂದಾಗಿ ಸೋಂಕು ಹರಡುವುದನ್ನು ನಿಯಂತ್ರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹುಲಿವೇಷ ಕುಣಿತಕ್ಕೆ ನಿಷೇಧ ಹೇರಲಾಗಿತ್ತು. ಇದರಿಂದಾಗಿ ಹರಕೆಯ ಕುಣಿತಕ್ಕೂ ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯ ಧಾರ್ಮಿಕ ಭಾವನೆಗಳನ್ನರಿತ ದೈಜಿವರ್ಲ್ಡ್ ಹರಕೆಯ ಕುಣಿತಕ್ಕೆ ಅವಕಾಶ ನೀಡಬೇಕೆಂದು ಅಭಿಯಾನ ಆರಂಭಿಸಿತ್ತು. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿತ್ತು. ದೈಜಿವರ್ಲ್ಡ್ ಅಭಿಯಾನಕ್ಕೆ ಅಧಿಕಾರಿಗಳು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಹರಕೆಯ ಕುಣಿತಕ್ಕೆ ಅವಕಾಶ ನೀಡಿದ ಜಿಲ್ಲಾಧಿಕಾರಿ:
ಈ ನಡುವೆ ಜಿಲ್ಲಾಡಳಿತದಲ್ಲಿ ಧಾರ್ಮಿಕ ಪರಿಷತ್ ನ ಆರನೇ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ದಸರಾ ಹಬ್ಬದಲ್ಲಿ ದೇವಸ್ಥಾನದ ಆವರಣದಲ್ಲಿ ಮಾತ್ರವೇ 10 ಹುಲಿ ವೇಷಧಾರಿಗಳಿಗೆ ಹರಕೆ ಅರ್ಪಿಸಲು ಮಾತ್ರ ಷರತ್ತು ಬದ್ದ ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.