ಮಂಗಳೂರು,ಅ. 13 (DaijiworldNews/HR): ಅಕ್ಟೋಬರ್ 8 ರಂದು ನಡೆದ ಭಾರತೀಯ ವಾಯು ಪಡೆಗಳ 88ನೇ ವರ್ಷಾಚರಣೆಯಲ್ಲಿ ಗ್ರೂಪ್ ಕ್ಯಾಪ್ಟನ್ ಹ್ಯಾನ್ಸೆಲ್ ಜೋಸೆಫ್ ಸಿಕ್ವೇರಾ ಅವರಿಗೆ ಯುದ್ಧ ಸೇವಾ ಪದಕವನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ಸೇರಿದಂತೆ ಭಾರತೀಯ ವಾಯುಪಡೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಮಂಗಳೂರಿನ ಕದ್ರಿ ಮೂಲದ ಗ್ರೂಪ್ ಕ್ಯಾಪ್ಟನ್ ಹ್ಯಾನ್ಸೆಲ್ ಜೋಸೆಫ್ ಸಿಕ್ವೇರಾ ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಇನ್ನು ಹ್ಯಾನ್ಸೆಲ್ ಸಿಕ್ವೇರಾ ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನ ಸೈಂಟ್ ಜೋಸೆಫ್ ಆರ್ಟ್ಸ್ ಹಾಗೂ ಸೈನ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 2000ರಲ್ಲಿ ಭಾರತೀಯ ವಾಯುಪಡೆಗೆ ನಿಯೋಜಿಸಲ್ಪಟ್ಟಿದ್ದರು.