ಮಂಗಳೂರು, ಸೆ. 28 (DaijiworldNews/MB) : 2019 ರಲ್ಲಿ ದೇರಳಕಟ್ಟೆಯ ಹಾಸ್ಟೇಲ್ ಒಂದಕ್ಕೆ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಮಾನಭಂಗ, ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.
ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶೆ ಸೈದುನ್ನಿಸಾ ತೀರ್ಪು ನೀಡಿದ್ದು ಅಪರಾಧಿ ನಾಗೇಶ್ (30) ಗೆ ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಿದ್ದಾರೆ.
2019 ರಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಠೆಯ ಹಾಸ್ಟೇಲ್ಗೆ ಮುಂಜಾನೆ 4:30 ಕ್ಕೆ ಹಾಸ್ಟೆಲ್ ಹಿಂಭಾಗದ ಪೈಪ್ ಮೂಲಕ ಒಳ ನುಗ್ಗಿ ಅಪರಾಧಿ ನಾಗೇಶ್ ಹಾಸ್ಟೇಲ್ನಲ್ಲಿದ್ದ ಕೇರಳ ಮೂಲದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆಯೊಡ್ಡಿ, ಐದು ಲಕ್ಷ ನಗದು ನೀಡುವಂತೆ ಬೆದರಿಸಿದ್ದು ವಿದ್ಯಾರ್ಥಿನಿಯ ಪರ್ಸನಿಂದ 3 ಸಾವಿರ ನಗದು ಎಟಿಎಂ ಕಾರ್ಡ್ ಪಿನ್ ನಂಬರ್ ಪಡೆದು ಮತ್ತೊಂದು ರೂಂ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದನು. ಕೃತ್ಯದ ಬಳಿಕ ಅಪರಾಧಿಯು ನಗರದ ಕಂಕನಾಡಿ ಎಟಿಎಂನಲ್ಲಿ ವಿದ್ಯಾರ್ಥಿನಿಯ ಕಾರ್ಡ್ನಿಂದ ಹಣ ವಿತ್ ಡ್ರಾ ಮಾಡಿದ್ದು ಬೆರಳಚ್ಚು ಮತ್ತು ಎಟಿಎಂ ಸಿಸಿ ಟಿವಿ ಆಧಾರದಲ್ಲಿ ಅಪರಾಧಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿತ್ತು.