ಉಡುಪಿ, ಸೆ. 21 (DaijiworldNews/SM): ಗುಡ್ಡ ಕುಸಿತದಿಂದಾಗಿ ಮಣಿಪಾಲದಲ್ಲಿ ಬಹು ಅಂತಸ್ತಿನ ಕಟ್ಟಡವೊಂದು ಅಪಾಯಕ್ಕಿ ಸಿಲುಕಿಕೊಂಡಿದೆ.
ಎಂಟು ಅಂತಸ್ಥಿನ ವಸತಿ ಸಮುಚ್ಚಯದಲ್ಲಿ ಸುಮಾರು 23 ಕುಟುಂಬಗಳು ವಾಸವಾಗಿವೆ. ಕಟ್ಟಡಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಕುಟುಂಬಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋಮವಾರ ಬೆಳಗ್ಗಿನಿಂದ ಭೂ ಕುಸಿತ ಆರಂಭಗೊಂಡಿದ್ದು, ಕುಸಿತ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಪ್ರದೇಶ ಅಪಾಯದ ಮುನ್ಸೂಚನೆಯಲ್ಲಿದೆ.
ಸ್ಥಳಕ್ಕೆ ನಗರ ಪಾಲಿಕೆ ಆಯುಕ್ತರಾದ ಆನಂದ್ ಕಲ್ಲೋಲಿಕರ್, ಎಂಜಿನಿಯರ್ ಮೋಹನ್ ರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಸ್ಥಳಾ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಎಂಜಿನಿಯರ್ ಮೋಹನ್, ಗೋಡೆಯಲ್ಲಿ ಬಿರುಕು ಉಂಟಾದಲ್ಲಿ ಅಪಾಯದ ಮುನ್ಸೂಚನೆಯಾಗಿದ್ದು, 24 ಮುಂಚಿತವಾಗಿ ಕಟ್ಟಡದಲ್ಲಿರುವವರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇಂದ್ರಾಳಿ ಜಂಕ್ಷನ್ ನಿಂದ ಮಣಿಪಾಲಕ್ಕೆ ಎರಡು ಕಿಲೋ ಮೀಟರ್ ಅಂತರವಿದ್ದು, ಈ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೇಯ ಕಾರಣದಿಂದಾಗಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.