ಕುಂದಾಪುರ, ಸೆ.18 (DaijiworldNews/HR): ಗಂಗೋಲಿಯ ಮಹಾಮಾಯಿ ಮಹಾಸತಿ ದೇವಸ್ಥಾನದೊಳಗೆ ನಿನ್ನೆ ಮಧ್ಯಾಹ್ನ ಪೆಟ್ರೋಲ್ ಸುರಿದು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ.
ಗಂಗೋಲಿಯ ಡಾಕು ಹಿಥ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ದೇವಾಸ್ಥಾನದ ಒಳಗೆ ಬೆಂಕಿಯಲ್ಲಿ ಉರಿಯುತ್ತಿರುವಾಗ ಅವರನ್ನು ಉಳಿಸಲು ಅನೇಕರು ಪ್ರಯತ್ನಿಸಿದ್ದು, ಅವರಲ್ಲಿ ಗಂಗೋಲಿಯ ಲಕ್ಷ್ಮಣ್ ಖಾರ್ವಿ ಮತ್ತು ಜನಾರ್ದನ್ ಖಾರಿ ತೀವ್ರ ಸುಟ್ಟ ಗಾಯಗಳಾಗಿದ್ದು ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾರ್ವಿ ಇದ್ದಕ್ಕಿದ್ದಂತೆ ದೇವಸ್ಥಾನದ ಒಳಗೆ ಬಂದು ತಂದಿದ್ದ ಪೆಟ್ರೋಲ್ ಡಬ್ಬವನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆ ಸಮಯದಲ್ಲಿ ಅನೇಕರು ಅವರನ್ನು ಉಳಿಸಲು ಧಾವಿಸಿದರು.
ತನ್ನ ಸಮುದಾಯದ ಕೆಲವು ದೇವಾಲಯಗಳ ವಾಡಿಕೆಯಂತೆ, ತನ್ನ ಮೇಲೆ ದೈವಿಕ ಶಕ್ತಿಗಳನ್ನು ಆಹ್ವಾನಿಸಬಹುದೆಂದು ಹೇಳಿಕೊಂಡ ರಾಘವೇಂದ್ರ ಖಾರ್ವಿ, ದೇವಾಲಯಗಳು ಅಧಿಕೃತ ದೇವಾಲಯದ ಪತ್ರವನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ದೂರುತ್ತಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯದ ಬಗ್ಗೆ ಬೆಸರಮಾಡಿಕೊಂಡ ಖಾರ್ವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಕುರಿತು ಗಂಗೊಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.