ಕಾಸರಗೋಡು, ಸೆ. 17 (DaijiworldNews/MB) : ಭೂಗತ ಪಾತಕಿ, ಗೂಂಡಾ, ಮಾಫಿಯಾ ಹತ್ತಿಕ್ಕಲು ಮಂಜೇಶ್ವರ ಪರಿಸರದಲ್ಲಿ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆಗೆ ಮುಂದಾಗಿದೆ.
ಇದಕ್ಕಾಗಿ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಕೇರಳ ಅಲ್ಲದೆ ಹೊರ ರಾಜ್ಯಗಳ ಕ್ರಿಮಿನಲ್ ಗಳು ಮಂಜೇಶ್ವರ ಪರಿಸರದಲ್ಲಿ ಠಿಕಾಣಿ ಹೂಡಿರುವುದಾಗಿ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇವರ ವಾಸ ಸ್ಥಳ ಪತ್ತೆಗೆ ದಾಳಿ ನಡೆಯುತ್ತಿದೆ . ಈಗಾಗಲೇ 25 ಕ್ಕೂ ಅಧಿಕ ಸ್ಥಳಗಳಿಗೆ ಈಗಾಗಲೇ ದಾಳಿ ನಡೆಸಲಾಗಿದೆ.
ಮಂಜೇಶ್ವರ ಠಾಣೆ ಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವವರ ಪತ್ತೆಗೆ ದಾಳಿ ನಡೆಸಲಾಗುತ್ತಿದೆ. ಗೂಂಡಾ, ಮಾಫಿಯಾ, ಮಾದಕ ವಸ್ತು, ಸಾಗಾಟ ಹಾಗೂ ಇನ್ನಿತರ ಪ್ರಕರಣ ಆರೋಪಿ ಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಮಾದಕವಸ್ತು ಸಾಗಾಟ, ದುಷ್ಕೃತ್ಯ ಹಾಗೂ ಇನ್ನಿತರ ಕೆಲ ಪ್ರಕರಣ ಗಳ ಬಳಿಕ ಆರೋಪಿಗಳು ತಲೆ ಮರೆಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಮಂಜೇಶ್ವರ ಗಡಿ ಪ್ರದೇಶದಲ್ಲಿ ಠಿಕಾಣಿ ಹೂಡುತ್ತಿದ್ದಾರೆ ಎಂಬ ಮಾಹಿತಿಯಂತೆ ದಾಳಿ ನಡೆಯುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ನೇತೃತ್ವದಲ್ಲಿ ಈ ತಂಡ ರಚಿಸಲಾಗಿದ್ದು, ಮಂಜೇಶ್ವರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅನೂಪ್, ಸಬ್ ಇನ್ಸ್ ಪೆಕ್ಟರ್ ರಾಘವನ್ ಈ ತಂಡದಲ್ಲಿದ್ದಾರೆ