ಬೈಂದೂರು, ಸೆ. 16 (DaijiworldNews/MB) : ಸುಮನಾವತಿ ನದಿ ದಡದಲ್ಲಿ ನಡೆದುಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಸುಮನಾವತಿ ಹೊಳೆಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಶಿವರಾಜ (27) ಎಂದು ಗುರುತಿಸಲಾಗಿದೆ.
ಶಿವರಾಜ ಅವರು ಸೆ. 13 ರಂದು ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿದ್ದು ಮನೆಗೆ ವಾಪಾಸ್ ಬಂದಿರಲಿಲ್ಲ. ಸೆ.15 ರಂದು ಬೆಳಿಗ್ಗೆ 08.30 ಗಂಟೆಗೆ ಉಪ್ಪುಂದ ಸುಮನಾವತಿ ನದಿಯ ಉಪ್ಪುಂದ ಬ್ರಿಡ್ಜ್ ಬಳಿ ನದಿಯಲ್ಲಿ ಮೃತ ದೇಹ ದೊರೆತಿದೆ.
ಅವರು ಸುಮನಾವತಿ ನದಿ ದಡದಲ್ಲಿ ಮನೆಗೆ ನಡೆದುಕೊಂಡು ವಾಪಾಸ್ ಬರುತ್ತಿದ್ದ ವೇಳೆ ವಿಪರೀತ ಗಾಳಿ-ಮಳೆಯಿಂದಾಗಿ ಆಕಸ್ಮಿಕವಾಗಿ ಕಾಲು ಜಾರಿ ಸುಮನಾವತಿ ಹೊಳೆಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.