ಕಾಸರಗೋಡು, ಆ. 22 (DaijiworldNews/MB) : ನದಿಯಲ್ಲಿ ದೋಣಿ ಮಗುಚಿ ಓರ್ವ ನಾಪತ್ತೆಯಾಗಿ ಮೂವರು ಅಪಾಯದಿಂದ ಪಾರಾದ ಘಟನೆ ಪೆರು೦ಬಳ ಹೊಳೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಪೆರುಂಬಳ ಚಿರುವಾದುಕಲ್ ನ ನಿಯಾಜ್ ( 23) ನಾಪತ್ತೆಯಾದ ಯುವಕ.
ಮರಳುಗಾರಿಕೆ ನಡೆಸುತ್ತಿದ್ದಾಗ ಘಟನೆ ನಡೆದಿದೆ. ಪೆರುಂಬಳ ಸೇತುವೆ ಬಳಿ ದೋಣಿ ಮಗುಚಿ ಬಿದ್ದಿದ್ದು, ನಿಯಾಜ್ ನೀರುಪಾಲಾದರೆ ಉಳಿದ ಇಬ್ಬರು ಈಜಿ ದಡ ಸೇರಿದ್ದಾರೆ.
ಅಗ್ನಿಶಾಮಕ ದಳದ ಸಿಬಂದಿಗಳು, ನಾಗರಿಕರು ಶೋಧ ನಡೆಸುತ್ತಿದ್ದಾರೆ