ಕುಂಬಳೆ, ಆ. 18, (DaijiworldNews/SM): ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಇಬ್ಬರು ಯುವಕರ ಮೃತದೇಹ ಕಾಸರಗೋಡು ಜಿಲ್ಲೆಯ ಕುಂಬಳೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಯಲ್ಲಿ ನಡೆದ ಘಟನೆ.
ನಾಯ್ಕಾಪುವಿನ ರೋಶನ್ (21) ಮತ್ತು ಮಣಿಕಂಠ(19) ರವರ ಮೃತದೇಹ ಕುಂಬಳೆ ಕೃಷ್ಣ ನಗರದ ಕಾಡಿನಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆಯಿಂದ ಇಬ್ಬರೂ ನಾಪತ್ತೆಯಾಗಿದ್ದರು.ಎರಡು ಮರಗಳಲ್ಲಿ ಇಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ . ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳ ಮಹಜರು ನಡೆಸಿದ್ದು, ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
ರೋಶನ್ ಮತ್ತು ಮಣಿಕಂಠ ಸ್ನೇಹಿತರಾಗಿದ್ದರು. ಮಂಗಳವಾರ ತಡರಾತ್ರಿ ನಾಯ್ಕಾಪುವಿನಲ್ಲಿ ಹರೀಶ್ (38) ಎಂಬವರನ್ನು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು. ಈ ಕೊಲೆಗೆ ಈ ಆತ್ಮಹತ್ಯೆ ಕೈವಾಡ ಇರಬಹುದು ಎಂಬ ಸಂಶಯ ಮೂಡಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.