ಕಾಸರಗೋಡು, ಆ. 18 (DaijiworldNews/MB) : ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಪೈವಳಿಕೆ ಸಮೀಪ ನಡೆದಿದ್ದು ಇನ್ನೋರ್ವ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಕಯ್ಯಾರ್ ಮೇರ್ಕಳದ ಅಬೂಬಕ್ಕರ್ ( 32) ಎಂದು ಗುರುತಿಸಲಾಗಿದೆ. ಹೇರೂರು ಬಿ.ಸಿ ರೋಡ್ ನ ಮುಹಮ್ಮದ್ ಹನೀಫ್ (35) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಬೆಳಿಗ್ಗೆ ಪೈವಳಿಕೆ ಸಮೀಪದ ಕಳಾಯಿ ಸೇತುವೆ ಬಳಿ ಅಪಘಾತ ನಡೆದಿದೆ. ಅತೀ ವೇಗದಿಂದ ಬಂದ ಟಿಪ್ಪರ್ ಲಾರಿ ಇವರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ರಸ್ತೆಗೆಸೆಯಲ್ಪಟ್ಟ ಇಬ್ಬರನ್ನು ನಾಗರಿಕರು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಅಬೂಬಕ್ಕರ್ ರಾತ್ರಿ ಮೃತಪಟ್ಟರು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.