ಮಂಗಳೂರು, ಆ. 09, (DaijiworldNews/SM): ಚಾಕಲೇಟ್ ತಿನ್ನುವ ವೇಳೆ ಗಂಟಲಲ್ಲಿ ಸಿಲುಕಿ ಎಂಟು ವರ್ಷದ ಬಾಲಕ ಮೃತಪಟ್ಟ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ.
ನಗರ ಹೊರವಲಯದ ಕೊಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಚ್ಚಿಲಗುಡ್ಡೆ ಎಂಬಲ್ಲಿ ಭಾನುವಾರ ಘಟನೆ ನಡೆದಿದ್ದು, ಉಚ್ಚಿಲ ನಿವಾಸಿ ಅಬ್ದುಲ್ ರಹೀಮ್ ಎಂಬವರ ಪುತ್ರ ಫೈಝಾನ್(8) ಮೃತ ಬಾಲಕನಾಗಿದ್ದಾನೆ.
ಚಾಕಲೇಟು ತಿನ್ನುವ ಸಂದರ್ಭದಲ್ಲಿ ಅವಘಡ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.