ಬಂಟ್ವಾಳ, ಆ 07 (DaijiworldNews/PY): ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸಜೀಪ ಮುನ್ನೂರು ಗ್ರಾಮದ ಶಾಂತಿನಗರ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ವಿಶ್ವನಾಥ ಮರ್ತಾಜೆ (63) ಎಂದು ತಿಳಿದುಬಂದಿದೆ.
ಆರೋಪಿಯು ಸಜೀಪ ಮುನ್ನೂರು ಗ್ರಾಮದ ಶಾಂತಿನಗರದ ಶೇಂದಿ ಅಂಗಡಿ ಸಮೀಪ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡುವ ಕುರಿತು ಮಾಹಿತಿ ತಿಳಿದ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಾಲಿಥಿನ್ ಚೀಲದಲ್ಲಿ ಆರೋಪಿಯು ಮದ್ಯ ಮಾರಾಟ ಮಾಡುತ್ತಿದ್ದು, 90 ಮಿ. ಮೀಟರ್ ನ 18 ಪೌಚ್ಗಳು ಚೀಲದಲ್ಲಿದ್ದವು. ಇದರ ಒಟ್ಟು ಮೌಲ್ಯ 600 ಆಗಿವೆ. ಅಲ್ಲದೇ, ಪ್ರೀಸ್ಟೇಜ್ ಖಾಲಿ ಸ್ಯಾಚೇಟ್ 6 ಹಾಗೂ ಮೈಸೂರು ಲ್ಯಾನ್ಸರ್ನ 12 ಖಾಲಿ ಪೌಚ್ ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್ಗಳಿದ್ದವು ಎನ್ನಲಾಗಿದೆ.