ಮಂಜೇಶ್ವರ,ಆ. 03, (DaijiworldNews/SM): ಸಂಬಂಧಿಕನಿಂದಲೇ ನಾಲ್ವರನ್ನು ಹತ್ಯೆಗೈದ ಘಟನೆ ಮಂಜೇಶ್ವರದ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ನಡೆದಿದೆ.
ಬಾಬು , ವಿಠಲ, ಸದಾಶಿವ, ದೇವಕಿ ಸೇರಿದಂತೆ ನಾಲ್ವರ ಕೊಲೆ ನಡೆದಿದೆ. ಸಂಬಂಧಿಕನಾದ ಉದಯ ಎಂಬಾತ ಕೃತ ಎಸಗಿದ ಆರೋಪಿಯಾಗಿದ್ದಾನೆ. ಆತ ಮಾನಸಿಕ ಅಸ್ವಸ್ಥ ನೆಂಬ ಮಾಹಿತಿ ಲಭ್ಯವಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.