ಉಡುಪಿ, ಜು 29 (DaijiworldNews/SM): ಜಿಲ್ಲೆಯಲ್ಲಿ ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆಯು ಬೆಳಗ್ಗೆ 11:30ರಿಂದ 11:50 ಮತ್ತು ಮಧ್ಯಾಹ್ನ 2:30ರಿಂದ 3:50ಕ್ಕೆ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಒಟ್ಟು 3915 ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿರುತ್ತಾರೆ. 1854 ಬಾಲಕರು ಹಾಘೂ 2061 ಬಾಲಕಿಯರು ಪರೀಕ್ಷ ಬರೆಯಲಿದ್ದಾರೆ ಎಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಭಗವಂತ ಕಟ್ಟಿಮನಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವ ಹಿನ್ನೆಯಲ್ಲಿ ವಿದ್ಯಾರ್ಥಿಗಳು 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಇರುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಸಿಇಟಿ ಒಟ್ಟು 10 ಪರೀಕಾ ಕೇಂದ್ರ ಕೇಂದ್ರಗಳಿದ್ದು, ಕಾರ್ಕಳ ತಾಲೂಕಿನಲ್ಲಿ-02, ಉಡುಪಿ ತಾಲೂಕಿನಲ್ಲಿ- 05, ಕುಂದಾಪುರ ತಾಲೂಕಿನಲ್ಲಿ - 03 ಕೇಂದ್ರಗಳಿವೆ. ಪ್ರತೀ ಕೇಂದ್ರದಲ್ಲಿ ತಲಾ 1 ವಿಶೇಷ ಕೊಠಡಿಯನ್ನು ತೆರೆಯಲಾಗಿದೆ. ಸಾಮಾನ್ಯ ಶೀತ, ಕೆಮ್ಮು, ಜ್ವರ, ನೆಗಡಿ, ಇಂತಹ ಲಕ್ಷಣಗಳಿರುವವರಿಗೆ ಇದನ್ನು ಉಪಯೋಗಿಸಲಾಗುವುದು.
ಕೋವಿಡ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೆ ಅದೇ ದಿನದಂದು ಪರೀಕ್ಷೆ ಬರೆಯಲು ತಾಲೂಕಿಗೆ ಒಂದರಂತೆ ಪತ್ಯೇಕವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಕಾರ್ಕಳ ತಾಲೂಕಿನಲ್ಲಿ ಶ್ರೀ ಭುವನೇಂದ್ರ ವಸತಿ ನಿಲ, ಉಡುಪಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ವಸತಿ ನಿಲಯ ಬನ್ನಂಜೆ, ಮತ್ತು ಕುಂದಾಪುರ ತಾಲೂಕಿನಲ್ಲಿ ಶ್ರೀ ದೇವರಾಜು ಅರಸ್ ವಸತಿ ನಿಲಯ ಇಲ್ಲಿ ತೆರೆಯಲಾಗಿದೆ. ಅಲ್ಲದೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಳೇಜು ಉಡುಪಿ ಉಡುಪಿ ಒಂದು ಹೆಚ್ಚುವರಿ ಪರೀಕ್ಷಾ ಕೇಂದ್ರವಾಗಿ ಕಾಯ್ದಿರಿಸಲಾಗಿದೆ.
ಈಗಾಗಲೇ ಎಲ್ಲಾ ಕೊಠಡಿಗಳನ್ನು ಸೋಂಕು ನಿವಾರಣಾ ದ್ರಾವಣ ಸಿಂಪಡಿಸಿ ಮತ್ತು ಡೆಸ್ಕುಗಳನ್ನು ಸ್ವಚ್ಚಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಬರುವಾಗ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಿಬ್ಬಂದಿಗಳಿಂದ, ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ, ನೀರು ಮತ್ತು ಸಾಬೂನುನಿಂದ ಕೈತೊಳೆದು ಮಾಸ್ಕ್ ಧರಿಸಿಕೊಂಡು ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದು ಎಂದು ಭಗವಂತ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.