ಮಣಿಪಾಲ, ಜು 29 (Daijiworld News/MSP): ಕಳೆದ ಕೆಲವು ದಶಕಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಕೋವಿಡ್ 19 ರಷ್ಟು ತೀವ್ರವಾಗಿ ಮಾನವರ ಮೇಲೆ ಪರಿಣಾಮ ಬೀರಿಲ್ಲ. ಸಕ್ರೀಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕ ಹೆಚ್ಚಾಗುತ್ತಲೇ ಇದೆ. ಇದನ್ನು ತಡಗಟ್ಟಲು ಸುಧಾರಿತ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ . ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ,ಜನರು ಸುರಕ್ಷಿತವಾಗಿರುವಂತೆ ಸಹಾಯ ಮಾಡಲು ಆಗಾಗ ಮಾರ್ಗಸೂಚಿಗಳಿಗೆ ಬಿಡುಗಡೆ ಮಾಡುತ್ತಿದೆ. ಮನೆಯಲ್ಲಿಯೇ ಐಸೋಲೇಷನ್ ಆಗುವ ರೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ನೀಡಲಾಗಿದೆ. ಇದನ್ನು ರೋಗಿಗಳು, ಕುಟುಂಬ ಸದಸ್ಯರು ಮತ್ತು ಮನೆಯಲ್ಲಿ ಕ್ವಾರಂಟೈನ್ ಆಗುವವರು ಅನುಸರಿಸುವುದು ಕಡ್ಡಾಯವಾಗಿದೆ.
ಈ ನಿಟ್ಟಿನಲ್ಲಿ ಕೊರೊನ ಸೋಂಕಿತರಿಗೆ, ಕುಟುಂಬ ಸದಸ್ಯರಿಗೆ ಮತ್ತು ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗಲು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ಹೋಮ್ ಐಸೋಲೇಷನ್ ಆರೈಕೆ ಕಾರ್ಯಕ್ರಮ ಮತ್ತು ಕಿಟ್ ಬಿಡುಗಡೆಗೊಳಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಣಾಧಿಕಾರಿ ಶ್ರೀ ಜಿ ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಮೊದಲ ಕಿಟ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಮಾರುಕಟ್ಟೆ ಮುಖ್ಯಸ್ಥರಾದ ಶ್ರೀ ಸಚಿನ್ ಕಾರಂತ ಮತ್ತು ಆಪರೇಷನ್ ಮುಖ್ಯಸ್ಥರಾದ ಜಿಬು ಥಾಮಸ್ ಉಪಸ್ಥಿತರಿದ್ದರು.
ಎರಡು ಬಗೆಯ ಪ್ಯಾಕೇಜ್ ಮತ್ತು ಕಿಟ್ ಸೌಲಭ್ಯವಿದ್ದು, ಹತ್ತು ದಿನಗಳ ಸಾಮಾನ್ಯ ಪ್ಯಾಕೇಜ್ ಗೆ Rs 4000, ಇದರಲ್ಲಿ ಒಂದು ಥರ್ಮೋಮೀಟರ್, ಒಂದು ಪಲ್ಸ್ ಒಕ್ಸಿಮೀಟರ್, ಹತ್ತು ಮುಖಗವಸುಗಳು, ಒಂದು ಪಿ ಪಿ ಇ ಕಿಟ್ , ಒಂದು ಸ್ಯಾನಿಟೈಝೆರ್(500ml) , ಒಂದು ವೈಟಲ್ ಚಾರ್ಟ್ ಗಳಿದ್ದು, ವೈದ್ಯರೊಂದಿಗೆ 3 ಬಾರಿ ಉಚಿತ ವಿಡಿಯೋ ಸಮಲೋಚನೆ (1 ನೇ ದಿನ 5 ನೇ ದಿನ,9 ನೇ ದಿನ), ಒಂದು ಸಲ ಪಥ್ಯಾಹಾರ ತಜ್ಞರೊಂದಿಗೆ ಉಚಿತ ಸಮಾಲೋಚನೆ ಮತ್ತು, ದಿನಕ್ಕ ಒಂದು ಸಲ ದಾದಿಯಾರೊಂದಿಗೆ ಉಚಿತ ವಿಡಿಯೋ ಸಮಾಲೋಚನೆ ಒಳಗೊಂಡಿದೆ. ಹತ್ತು ದಿನಗಳ ಸಮಗ್ರ ಪ್ಯಾಕೆಜ್ ಗೆ ರೂ.6000ಗಳಿದ್ದು ಹೆಚ್ಚುವರಿಯಾಗಿ ಒಂದು ಬಿ ಪಿ ಅಪರೇಟೀಸ್ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820- 2922761 ಗೆ ಸಂಪರ್ಕಿಸಬಹುದು.