ಉಡುಪಿ, ಜು. 29 (DaijiworldNews/MB) : ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮೂವರು ಕೊರೊನಾಗೆ ಬಲಿಯಾಗಿದ್ದು ಸೋಂಕು ಬಂದು ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.
ಪ್ರಾತಿನಿಧಿಕ ಚಿತ್ರ
ಕಿಡ್ನಿ ಸಮಸ್ಯೆ ಮತ್ತು ಇಲಿ ಜ್ವರದಿಂದ ಬಳಲುತಿದ್ದ ಕಾರ್ಕಳದ ಅಜೆಕಾರು ಗ್ರಾಮದ ಎಣ್ಣೆಹೊಳೆಯ 60 ವರ್ಷ ಮೇಲ್ಪಟ್ಟ ವ್ಯಕ್ತಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಬಳಿಕ ಕೊರೊನಾ ವರದಿ ಪಾಸಿಟಿವ್ ಆಗಿದೆ.
ಅಂಬಲಪಾಡಿಯ ಮಹಿಳೆ ಸೋಮವಾರ ಸಂಜೆ ಸಾವನ್ನಪ್ಪಿದ್ದು ಅವರು ಉಬ್ಬಸದಿಂದ ಬಳಲುತ್ತಿದ್ದರು. ಹಾಗೆಯೇ ಕೊರೊನಾ ಕೂಡಾ ದೃಢಪಟ್ಟಿತ್ತು.
ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದ ಕಾರ್ಕಳದ ವ್ಯಕ್ತಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ.