ಕಾಸರಗೋಡು, ಜು.28 (DaijiworldNews/SM): ಒಂದೇ ಕುಟುಂಬದ ಆರು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ನೀಲೇಶ್ವರ ಪಳ್ಳಿ ಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದವರಿಗೆ ಸೋಂಕು ತಗಲಿದೆ.
ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಒಳಗೊಂಡಿದ್ದಾರೆ. ನೀಲೇಶ್ವರ ದ ತಲೆ ಹೊರೆ ಕಾರ್ಮಿಕನ ಕುಟುಂಬದವರಿಗೆ ಸೋಂಕು ದೃಢಪಟ್ಟಿದೆ. ಈ ಪರಿಸರದ 25 ಮಂದಿಯನ್ನು ಆಂಟಿಜನ್ ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ತಲೆ ಹೊರೆ ಕಾರ್ಮಿಕನಿಗೆ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಉಳಿದ ಕಾರ್ಮಿಕರಿಗೆ ಕ್ವಾರಂಟೈನ್ ಗೆ ತೆರಳಿದ್ದಾರೆ.
ಕೋವಿಡ್ ಆಸ್ಪತ್ರೆ ಕಾಮಗಾರಿ ನಡೆಸುವ ಸಿಬ್ಬಂದಿಗಳಲ್ಲೂ ಪಾಸಿಟಿವ್:
ಕೋವಿಡ್ ಆಸ್ಪತ್ರೆ ಕಾಮಗಾರಿ ನಡೆಸುತ್ತಿರುವ ನಾಲ್ವರು ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸುಮಾರು 60ರಷ್ಟು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಸೋಂಕಿತರಲ್ಲಿ ಮೂವರು ಒಡಿಸ್ಸಾ ಹಾಗೂ ಓರ್ವ ಆಂಧ್ರ ಪ್ರದೇಶ ನಿವಾಸಿಗಳಾಗಿದ್ದಾರೆ. ಇವರಿಗೆ ಸಂಪರ್ಕ ದಿಂದ ಸೋಂಕು ತಗಲಿದೆ.
ಕಾಸರಗೋಡಿನಿಂದ 8 ಕಿ.ಮೀ. ದೂರದ ಚಟ್ಟಂಚಾಲ್ ನಲ್ಲಿ ಟಾಟಾ ಗ್ರೂಫ್ ಹಾಗೂ ಕೇರಳ ಸರಕಾರದ ಸಹಯೋಗದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ನಡೆಯುತ್ತಿದ್ದು. ಕಾಮಗಾರಿ ಅಂತಿಮ ಹಂತದಲ್ಲಿದೆ. ಜುಲೈ 31ರ ಮೊದಲು ಉದ್ವಾಟನೆ ನಡೆಸಲು ತೀರ್ಮಾನಿಸಲಾಗಿದ್ದು. ಈ ನಡುವೆ ಕಾರ್ಮಿಕರಿಗೆ ಸೋಂಕು ಪತ್ತೆಯಾಗಿರುವುದು ವಿಳಂಬವಾಗಬಹುದೇ ಎನ್ನುವ ಸಂದೇಹ ಮೂಡ ತೊಡಗಿದೆ.