ಕಾಪು, ಜು 25 (Daijiworld News/MSP): ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿ,ಮೃತ ದೇಹವನ್ನು ಸುಟ್ಟು ಹಾಕಲು ಯತ್ನಿಸಿದ ಘಟನೆ ಶುಕ್ರವಾರ ಜುಲೈ 24 ಪೂರ್ವಹ್ನ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪುಂಚಲ ಕಾಡು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎರ್ಮಾಳು ನಿವಾಸಿ ಹೇಮಂತ್ ಪೂಜಾರಿ (45) ಕೊಲೆಯಾದ ವ್ಯಕ್ತಿ. ಪುಂಚಲಕಾಡು ನಿವಾಸಿ ಅಲ್ಬರ್ಟ್ ಡಿ ಸೋಜ (50) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ಶುಕ್ರವಾರ ಬೆಳಗ್ಗೆ ಇಬ್ಬರೂ ಬಾರ್ ನಲ್ಲಿ ಕುಡಿದು , ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ, ಆಲ್ಬರ್ಟ್ ತನ್ನ ಗೆಳೆಯನಿಗೆ ಕಟ್ಟಿಗೆಯಿಂದ ಹೊಡಿದಿದ್ದಾನೆ. ಹೊಡೆದ ಪೆಟ್ಟಿಗೆ ಹೇಮಂತ್ ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
ಕೊಲೆ ಆರೋಪಿ ಅಲ್ಬರ್ಟ್ ಕೃತ್ಯ ನಡೆಸಿದ ಬಳಿಕ ಶವವನ್ನು ತನ್ನ ಮನೆಯಂಗಳದಲ್ಲೇ ಸುಡಲು ಯತ್ನಿಸಿದ್ದಾನೆ. ಸುತ್ತಲೂ ಹರಡಿದ ವಾಸನೆಯಿಂದ ಸಂಶಯಗೊಂಡ ಸ್ಥಳೀಯರು ಪೋಲಿಸರಿಗೆ ತಿಳಿಸಿದ್ದಾರೆ. ಇದಕ್ಕೆ ಕುರುಹಾಗಿ ಮೃತ ಹೇಮಂತ್ ಪೂಜಾರಿಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಮೂಲಕ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ, ತಕ್ಷಣ ಕಾರ್ಯ ಪ್ರವೃತ್ತರಾಗಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಶಿರ್ವ ಎಸೈ ಸ್ಥಳಕ್ಕೆ ಬೇಟಿ ನೀಡಿ, ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.