ಬೆಳ್ಮಣ್, ಜು. 22 (DaijiworldNews/SM): ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಜರಕಟ್ಟೆಯಲ್ಲಿ ಕಾರ್ಯಚರಿಸುತ್ತಿದ್ದ ಗೋಣಿಚೀಲ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಕಾರ್ಮಿಕನಿಗೆ ಕೋವಿಡ್-19 ಸೋಂಕು ಇರುವುದು ಬುಧವಾರ ದೃಢವಾಗಿದೆ.
ಇಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರಿಗೆ ಕರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಂಪನಿ ಹಾಗೂ ಸಮೀಪದ ಹೋಟೆಲ್ ಅಂಗಡಿಗಳನ್ನು ಮಂಗಳವಾರ ಮುಂಜಾಗ್ರತ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಮತ್ತೆ ಕಂಪನಿಯ ಕೆಲಸದಲ್ಲಿದ್ದ ಪಡುಬಿದ್ರೆ ಮೂಲದ ಕಾರ್ಮಿಕನೋರ್ವನಿಗೆ ಸೋಂಕು ಇರುವುದು ದೃಢವಾಗಿದೆ.
ಇಲ್ಲಿ ಕಾರ್ಮಿಕರಾಗಿದ್ದ ಬೆಳ್ಮಣ್ ಮೂಲಕ ಒಬ್ಬರಿಗೆ ಹಾಗೂ ಅಡ್ವೆಯ ಎರಡು ಮಂದಿಗೆ ಪಡುಬಿದ್ರೆಯ ಒಬ್ಬರಿಗೆ ಮಂಗಳವಾರ ಸೋಂಕು ಇರುವುದು ದೃಢವಾಗಿತ್ತು. ಇದೀಗ ಮತ್ತೆ ಪಡುಬಿದ್ರೆ ಮೂಲದ ವ್ಯಕ್ತಿಯೊಬ್ಬರಿಗೆ ಕರೋನಾ ಸೋಂಕು ಇರುವುದು ಬುಧವಾರ ದೃಢವಾಗಿದೆ.
ಗೋಣಿಚೀಲ ತಯಾರಿಕ ಕಂಪನಿಯಲ್ಲಿ ಐದುನೂರಕ್ಕೂ ಅಧಿಕ ಮಂದಿ ಕೆಲಸವನ್ನು ನಿರ್ವಹಿಸುತ್ತಿದ್ದು ಇನ್ನಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ . ಈ ಬಗ್ಗೆ ಮುಂಜಾಗೃತ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.