ಮಂಗಳೂರು, ಜು.19 (DaijiworldNews/MB) : ಮುಖ್ಯ ಅಂಚೆ ಕಚೇರಿಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಪಾಸಿಟಿವ್ ಆದ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ 13 ಅಂಚೆ ಕಚೇರಿಗಳು ಜುಲೈ 20 ಸೋಮವಾರ ಬಂದ್ ಆಗಲಿದೆ.
ಸಾಂದರ್ಭಿಕ ಚಿತ್ರ
ಪಾಂಡೇಶ್ವರದಲ್ಲಿರುವ ಮುಖ್ಯ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ನಗರದ 13 ಅಂಚೆ ಕಚೇರಿಗಳು ಸೋಮವಾರ ಮುಚ್ಚಲ್ಪಡುತ್ತವೆ ಎಂದು ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷನ್ ಎನ್ ಮಾಹಿತಿ ನೀಡಿದ್ದಾರೆ.
ಪಾಂಡೇಶ್ವರದಲ್ಲಿ ಮುಖ್ಯ ಅಂಚೆ ಕಚೇರಿ, ಹಂಪನಕಟ್ಟೆ, ಅಶೋಕ್ನಗರ, ಗಾಂಧಿನಗರ, ಬೊಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ಬೈಲ್, ಫಳ್ನೀರ್, ಫಿಶರೀಸ್ ಕಾಲೇಜು, ಮಂಗಳೂರು ಕಲೆಕ್ಟರೇಟ್ ಮತ್ತು ಎಸ್ ಒ ಕಚೇರಿಯಲ್ಲಿರುವ ಅಂಚೆ ಕಚೇರಿಗಳು ಸೋಮವಾರ ಕಾರ್ಯನಿರ್ವಹಿಸುವುದಿಲ್ಲ.
ಜುಲೈ 13 ರ ಶನಿವಾರದಂದು ಎಲ್ಲಾ 13 ಅಂಚೆ ಕಚೇರಿಗಳನ್ನು ಸ್ವಚ್ಛಗೊಳಿಸಲಾಗಿದ್ದು ಎರಡು ದಿನಗಳ ಕಾಲ ಮುಚ್ಚಲಾಗುತ್ತದೆ ಎಂದು ಶ್ರೀಹರ್ಷನ್ ಎನ್ ತಿಳಿಸಿದ್ದಾರೆ.