ಕಾಸರಗೋಡು, ಜು.18 (DaijiworldNews/SM): ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೊರೋನ ಸೋಂಕು ದ್ರಢಪಟ್ಟಿದೆ. ಈ ಪೈಕಿ 24 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮೀ0ಜದ 6 ಮಂದಿಗೆ, ಕುಂಬಳೆಯ 5 ಮಂದಿಗೆ, ಚೆಂಗಳದ 4 ಮಂದಿಗೆ, ಮಂಜೇಶ್ವರದ 4 ಮಂದಿಗೆ, ಪುಲ್ಲೂರು ಪೆರಿಯದ 2 ಮಂದಿಗೆ, ಮಂಗಲ್ಪಾಡಿಯ ಇಬ್ಬರಿಗೆ, ಬಳಾಲ್, ಕಾಸರಗೋಡು, ಮಧೂರು, ಕುತ್ತಿಕೋಲ್, ಕಾಞ0ಗಾಡ್, ಪುತ್ತಿಗೆಯ ತಲಾ ಒಬ್ಬರಿಗೆ ಸೋಂಕು ತಗಲಿದೆ.
ಜಿಲ್ಲೆಯ ಬಳಾಲ್ ನ 18 ವರ್ಷದ ಯುವಕ, ಮಂಜೇಶ್ವರದ 28 ವರ್ಷದ ಯುವಕ, 60 ವರ್ಷದ ವ್ಯಕ್ತಿ, 49 ವರ್ಷದ ವ್ಯಕ್ತಿ, 51 ವರ್ಷದ ವ್ಯಕ್ತಿಗಳಲ್ಲಿ, ಚೆಂಗಳದ 34, 65, 38 ವರ್ಷದ ವ್ಯಕ್ತಿಗಳಲ್ಲಿ, 47 ವರ್ಷದ ಮಹಿಳೆ , ಮೀಂಜದ 33 ಮತ್ತು 35 ವರ್ಷದ ವರ್ಷದ ವ್ಯಕ್ತಿಗಳಲ್ಲಿ, 7 ಮತ್ತು 14 ವರ್ಷದ ಬಾಲಕರು, 31, 32 ವರ್ಷದ ಮಹಿಳೆಯರು, ಪುಲ್ಲೂರು - ಪೆರಿಯ ಪಂಚಾಯತ್ ನ 74 ಮತ್ತು 47 ವರ್ಷದ ಮಹಿಳೆಯರು, ಕುಂಬಳೆ 52 ವರ್ಷ ವ್ಯಕ್ತಿ ಹಾಗೂ 45 ವರ್ಷದ ಪತ್ನಿಗೆ ಸಂಪರ್ಕದಿಂದ ಸೋಂಕು ದ್ರಢಪಟ್ಟಿದೆ. ಜುಲೈ ೧೮ರಂದು ೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.,ಜಿಲ್ಲೆಯಲ್ಲಿ 5,946 ಮಂದಿ ನಿಗಾದಲ್ಲಿದ್ದು , 877 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 847 ಮಂದಿಗೆ ಸೋಂಕು ಪತ್ತೆಯಾಗಿದ್ದು, 513 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 334 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.