ಮಲ್ಪೆ, ಜು 18 (Daijiworld News/MSP): ವಿದ್ಯುತ್ ಶಾಕ್ ತಗುಲಿ ಎಸೆಸೆಲ್ಸಿ ಬಾಲಕ ಸಾವನ್ನಪ್ಪಿದ ಘಟನೆ ಜು.17 ರ ಶುಕ್ರವಾರ ರಾತ್ರಿ ಲಕ್ಷ್ಮೀನಗರದ ಗರ್ಡೆಯ 6 ನೇ ಕ್ರಾಸ್ ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಮಂಜುನಾಥ್ ನಾಯಕ್ - ಶಕುಂತಲಾ ದಂಪತಿಯ ಪುತ್ರ ಗೌತಮ್ (16) ಎಂದು ಗುರುತಿಸಲಾಗಿದೆ. ಈತ ಮಿಲಾಗ್ರಿಸ್ ಕನ್ನಡ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇತ್ತೀಚೆಗೆ ತಾನೇ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ.
ಶುಕ್ರವಾರ ರಾತ್ರಿ ಸುಮಾರು 7.30ರ ವೇಳೆಗೆ ಮನೆಯ ಅಂಗಳದ ಬಾವಿಯ ಪಂಪ್ ಮೇಲೆತ್ತುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ತಗಲಿ ಸಾವನ್ನಾಪ್ಪಿದ್ದಾನೆಂದು ಎಂದು ಸ್ಥಳೀಯರು ತಿಳಿದಿದ್ದಾರೆ.