ಕುಂದಾಪುರ, ಜು.17 (DaijiworldNews/MB) : ಕುಂದಾಪುರ ಖಾರ್ವಿ ಕೇರಿ ನಿವಾಸಿ, ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್, ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರ ಜುಲೈ 16 ರಂದು ಕುವೈಟ್ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 22 ದಿನಗಳಿಂದಲೂ ಕುವೈಟ್ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇವರು ಕುವೈಟ್ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಜುಲೈ 16 ರ ಗುರುವಾರದಂದು ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಮೃತ ದೇಹದ ಅಂತಿಮ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಅವರು ಯು.ಎ. ಇ ಯಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದು ಬಳಿಕ ಕುವೈಟ್ನಲ್ಲಿ ಉದ್ಯೋಗದಲ್ಲಿದ್ದರು. ಕುಂದಾಪುರದಲ್ಲಿ 80ರ ದಶಕದಲ್ಲಿ ಖ್ಯಾತ ಕ್ರೀಡಾಪಟುವಾಗಿದ್ದ ಅವರು ಯುವ ಆಟಗಾರರಿಗೆ ತರಬೇತುದಾರರೂ ಕೂಡಾ ಆಗಿದ್ದರು.