ಕೋಟ, ಜು 06 (Daijiworld News/MSP):ಕೋಟದ ಹೋಟೆಲ್ ಒಂದರ ಮಾಲಿಕರಿಗೆ ನಾಲ್ಕು ದಿನಗಳ ಕೊರೋನಾ ಪಾಸಿಟಿವ್ ಬಂದ ಹಿನ್ನಲ್ಲೆಯಲ್ಲಿ ಶುಕ್ರವಾರ ಹೋಟೆಲ್ ಮಾಲಿಕರ ಮನೆಯವರ , ಸಿಬ್ಬಂದಿಗಳ ಸುತ್ತಮುತ್ತಲಿನ ಪರಿಸರದ ಅಂಗಡಿ ಮುಂಗಟ್ಟಿನವರ ಗಂಟಲ ಮಾದರಿ ಪರೀಕ್ಷೆಯನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳಪಡಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಭಾನುವಾರ ಮಾದರಿ ಪರೀಕ್ಷೆಯಲ್ಲಿ ಒಟ್ಟು ಒಂಭತ್ತು ಜನರಿಗೆ ಕೊರೋನಾ ಪಾಸಿಟಿವ್ ಬಂದ ದಿಸೆಯಲ್ಲಿ ಕೋಟ ಕಂದಾಯ ನಿರೀಕ್ಷಕ ರಾಜು.ವಿ.ಎ ಚಲುವರಾಜು,ಆರಕ್ಷಕ ಅಧಿಕಾರಿ ಗಣೇಶ್ ಪೈ,ಕೋಟ ಗ್ರಾಮಪಂಚಾಯತ್ ಪಿಡಿಓ ಸುರೇಶ್ ಬಂಗೇರ ನೇತ್ರತ್ವದಲ್ಲಿ ಸ್ಥಳೀಯ ದಿನಸಿ ಅಂಗಡಿಯ ಮಾಲಿಕನ ಮನೆ,ಹಾಗೂ ಹೋಟೆಲ್ ಸಿಬ್ಬಂದಿಗಳ ಮನೆ, ಸಾಲಿಗ್ರಾಮದ ಕಾರ್ಕಡ ಒರ್ವ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನಲ್ಲೆಯಲ್ಲಿ ಸೀಲ್ ಡೌನ್ ಗೊಳಿಸಲಾಗಿದೆ.
ದಿನಸಿ ಗೂಡ್ಸ್ ಗಳ ಮೂಲಕ ಹರಡಿತೇ!
ಲಾಕ್ ಡೌನ್ ತೆರೆವುಗೊಂಡ ದಿನಗಳಿಂದ ವಾಹನ ಸಂಚಾರ ಪ್ರಾರಂಭಗೊಂಡಿತು ಅದರಂತೆ ದಿನಸಿ ಸಾಮಾನುಗಳನ್ನು ಕರೆತರುವ ಗೂಡ್ಸ್ ವಾಹನಗಳ ಮೂಲಕ ವ್ಯವಹಾರ ಕಾರ್ಯದಲ್ಲಿರುವ ಅಂಗಡಿಯ ಮಾಲಿಕರ ಮೂಲಕ ಈ ವೈರಸ್ ಹರಡಿರುವ ಶಂಕೆ ವ್ಯಕ್ತವಾಗುತ್ತಿದೆ. ಹೋಟೆಲ್ ಮತ್ತು ದಿನಸಿ ಅಂಗಡಿ ಅಕ್ಕಪಕ್ಕ ವಿರುವುದರಿಂದ ಯಾರಿಂದ ಈ ವೈರಸ್ ಪ್ರಸರಣವಾಗಿದೆ ಎಂಬ ಅನುಮಾನು ಅನುಮಾನವಾಗಿಯೇ ಉಳಿದುಕೊಂಡಿದೆ.
ನೋವು ತೋಡಿಕೊಂಡ ಅಂಗಡಿ ಮಾಲಿಕ
ಸೀಲ್ ಡೌನ್ ಗೊಳಿಸಲು ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಮನೆಯಲ್ಲಿರುವ ಮೂರು ತಿಂಗಳ ಮಗು ಇರುವುದರಿಂದ ನಾನು ದಿನಸಿ ವ್ಯಾಪಾರ ವಹಿವಾಟು ಸ್ಥಬ್ಧಗೊಳಿಸಿದ್ದೇನೆ ತದನಂತರ ಲಾಕ್ ಡೌನ್ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ದಿನಸಿ ಸಾಮಾನು ದೊರಕಬೇಕೆಂಬ ಉದ್ದೇಶದಿಂದ ಪಂಚಾಯತ್ ಕೋವಿಡ್ ಕಾರ್ಯಪಡೆ ಅಂಗಡಿ ತೆರೆಯಲು ಸೂಚಿಸಿದರು.ಅದರಂತೆ ಇಂದು ಈ ಸ್ಥಿತಿ ನಿರ್ಮಾಣಗೊಂಡಿದೆ.ಇದಕ್ಕೆ ಯಾರಾದರೂ ಈ ಸಂದರ್ಭದಲ್ಲಿ ಬರುತ್ತಿರಾ ಎಂದು ಅಧಿಕಾರಿ ವರ್ಗದವರಲ್ಲಿ ನೋವು ತೊಡಿಕೊಂಡರು.
ಸಮುದಾಯಕ್ಕೆ ಹರಡಿರಬಹುದೇ?
ಹೋಟೆಲ್ ಮಾಲಿಕರಿಗೆ ಪಾಸಿಟಿವ್ ಬಂದ ಹಿನ್ನಲ್ಲೆಯಲ್ಲಿ ಆ ಹೋಟೆಲ್ ಉಪಹಾರ ಸೇವಿಸಿದವರ ಸಂಖ್ಯೆ ಅತಿಯಾಗಿದ್ದು ಒಂದೆಡೆಯಾದರೆ ಇನ್ನೊಂದೆಡೆ ಅಂಗಡಿಯಿಂದ ದಿನಸಿ ಕೊಂಡ್ಯೊಯ್ದವರ ಗತಿ ಎನೆಂಬುವುದು ಯಕ್ಷ ಪ್ರಶ್ನೆಯಾಗಿದೆ.ಅಲ್ಲದೆ ಸೋಮವಾರ ಇನ್ನುಳಿದವರ ಮಾದರಿ ಪರೀಕ್ಷೆ ಬರುವುದು ಬಾಕಿ ಇರುವುದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.